ಕಚೇರಿಯ ಬಳಿಕ ವಿದ್ವಾನ್ ವಿಠ್ಠಲ ರಾಮಮೂರ್ತಿಯವರು ಮಾಡಿದ ಭಾಷಣದ ಸಾರಾಂಶ

ದಿನಾಂಕ 9.9.2018 ರಂಜನಿ ಹುಟ್ಟಿದ ದಿನ. ಅಂದು ಶ್ರೀ ವಿಠ್ಠಲ ರಾಮಮೂರ್ತಿ ಮತ್ತು ಶ್ರೀ ವಿ.ವಿ.ಎಸ್. ಮುರಾರಿಯವರ ವಯೊಲಿನ್ – ವಯೊಲಾ ಕಚೇರಿ. ಕಚೇರಿಯ ಬಳಿಕ ವಿದ್ವಾನ್ ವಿಠ್ಠಲ ರಾಮಮೂರ್ತಿಯವರು ಮಾಡಿದ ಭಾಷಣದ ಸಾರಾಂಶ- ಇವತ್ತಿನ ಕಚೇರಿ ರಂಜನಿಯ ಹುಟ್ಟುಹಬ್ಬಕ್ಕೆ ನಮ್ಮ ಪ್ರೀತಿಯ ಕಾಣಿಕೆ. ರಂಜನಿಯ ಬಗೆಗೆ ನಿಮಗೆಲ್ಲ ಗೊತ್ತು. ತನ್ನ ತಂದೆ ತಾಯಿಯಿಂದ, ನಮ್ಮ ಕರಂಬಿತ್ತಿಲ್ ಮನೆಗೆ ಬಂದು ನಮ್ಮಿಂದ, ಮಡಂತ್ಯಾರಿನ ನನ್ನ ತಂಗಿಯ ಮನೆಗೆ ಹೋಗಿ ಅವಳಿಂದ, ಚೆನ್ನೈಯ ಎಸ್. ಸೌಮ್ಯ ಅವರ ಮನೆಯಲ್ಲಿ Read More

ರಂಜನಿ ಸಂಸ್ಮರಣಾ ಸಂಗೀತ ಕಛೇರಿಗಳು – 2015 ಚೆನ್ನೈಯಲ್ಲಿ

2015 ರ ಸಾಲಿನಲ್ಲಿ ರಂಜನಿ ಸಂಸ್ಮರಣಾ ಸಂಗೀತ ಕಛೇರಿಗಳು ಚೆನ್ನೈ, ಉಡುಪಿ ಮತ್ತು ಮಂಗಳೂರಿನಲ್ಲಿ ನಡೆದಿವೆ. ರಂಜನಿ ಗತಿಸಿ ಹೋದ ದಿನ ಜೂನ್ 9ಕ್ಕೆ ಇನ್ನು ಪ್ರತಿ ವರ್ಷ ಚೆನ್ನೈನಲ್ಲಿ, ಮೈಲಾಪುರದ ರಾಗಸುಧಾ ಹಾಲ್‍ನಲ್ಲಿ ರಂಜನಿ ಸಂಸ್ಮರಣಾ ಕಛೇರಿ ನಡೆಯಲಿದೆ. ಇದರ ಪ್ರಾಯೋಜಕರು ಡಾ. ಎನ್. ರಾಜಗೋಪಾಲನ್, ಚೆನ್ನೈ ಇವರು. ರಂಜನಿಯ ಪರಮ ಅಭಿಮಾನಿ. 85 ವರ್ಷದ ಈ ಹಿರಿಯರು ತಮ್ಮ ತಂದೆ-ತಾಯಿಯರ ಹೆಸರಿನಲ್ಲಿ ರಂಜನಿಯ ನೆನಪಿಗಾಗಿ 1 ಲಕ್ಷ ರೂಪಾಯಿ ದತ್ತಿ ನಿಧಿಯನ್ನು ಸ್ಥಾಪಿಸಿ ಪ್ರತಿ Read More

ಮಂಗಳೂರಿನಲ್ಲಿ ರಂಜನಿ ಸಂಸ್ಮರಣಾ ಸಂಗೀತ ಕಛೇರಿಗಳು – 2015

ಸಪ್ಟೆಂಬರ್ 10 ರಂದು ಮಂಗಳೂರಿನ ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ವತಿಯಿಂದ ರಂಜನಿ ಸಂಸ್ಮರಣ ಕಾರ್ಯಕ್ರಮವಾಗಿ ಶ್ರೀ ಪಿ. ನಿತ್ಯಾನಂದ ರಾವ್ ಅವರು ಶಾರದಾ ವಿದ್ಯಾಲಯದಲ್ಲಿ ಕು. ಅರ್ಚನಾ – ಸಮನ್ವಿಯವರ ದ್ವಂದ್ವ ಹಾಡುಗಾರಿಕೆಯನ್ನು ಪ್ರಸ್ತುತ ಪಡಿಸಿದ್ದರು. ಈ ಚಿಕ್ಕವರಿಬ್ಬರೂ ಸಾವೇರಿ ವರ್ಣದ ಜತೆಗೆ ಬಹುಬೇಗನೆ ಕುದುರಿಕೊಂಡರು. ನೆಗಡಿಯಿಂದ ಆತಂಕಗೊಂಡ ಗಂಟಲು ವೇದಿಕೆಯ ಮೇಲೆ ತನ್ನ ಇರವನ್ನು ತೋರಗೊಡಲಿಲ್ಲ. ಒಂದು ಪುಟ್ಟ, ಆದರೆ ಅಂzವÁದ ನೇಯ್ಗೆಯೊಂದಿಗೆ ಊತ್ತುಕ್ಕಾಡು ವೆಂಕಟಕವಿಯವರ ಪ್ರಣವಾಕಾರಂ ಎಂಬ ಆರಭಿ ರಾಗದ ಕೃತಿ ಪ್ರೌಢವಾಗಿ ಮೂಡಿ Read More

ರಂಜನಿ ಸಂಸ್ಮರಣಾ ಸಂಗೀತ ಕಛೇರಿಗಳು – 2015 ರಾಗಧನ,ಉಡುಪಿ

ಸೆಪ್ಟೆಂಬರ 9, 2015 ರಂಜನಿಯ 33 ನೆಯ ಹುಟ್ಟು ಹಬ್ಬದ ದಿನ. ಆ ಪ್ರಯುಕ್ತ ಉಡುಪಿಯಲ್ಲಿ ಎರಡು ಸಂಸ್ಥೆಗಳು ಸಂಸ್ಮರಣ ಕಛೇರಿಗಳನ್ನು ನಡೆಸಿದವು. ಸೆಪ್ಟೆಂಬರ 5ರಂದು ಉಡುಪಿಯ ರಾಗಧನ ಸಂಸ್ಥೆಯು ಸರಿಗಮ ಭಾರತಿ, ಪರ್ಕಳ ಇವರ ¸ಹÀಭಾಗಿತ್ವದಲ್ಲಿ ಪ್ರಾರ್ಥನಾ ಸಾಯಿ ನರಸಿಂಹನ್ ಅವರ ಕಛೇರಿ ಏರ್ಪಡಿಸಿತ್ತು. ಚೆನ್ನೈನ ರಾಜೇಶ ಕೆ.ಜಿ. ವಯಲಿನ್‍ನಲ್ಲೂ ಬೆಂಗಳೂರಿನ ಅಕ್ಷಯ ಆನಂದ್ ಮೃದಂಗದಲ್ಲೂ, ಶಿವರಾಮ ಕೃಷ್ಣನ್ ಖಂಜೀರದಲ್ಲೂ ಸಹಕರಿಸಿದ್ದರು. ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಕೃಷ್ಣಾಷ್ಟಮಿಯ ದಿನ ನಡೆದ ಈ ಕಛೇರಿಯಲ್ಲಿ ಪ್ರಾರ್ಥನಾ ಅತ್ಯಂತ Read More

ರಂಜನಿ ಸಂಸ್ಮರಣಾ ಸಂಗೀತ ಕಛೇರಿಗಳು – 2015 ರಂಜನಿ ಮೆಮೋರಿಯಲ್ ಟ್ರಸ್ಟ್‍, ಉಡುಪಿ

ಸೆಪ್ಟೆಂಬರ 6ರಿಂದ 9ರ ವರೆಗೆ ರಂಜನಿ ಮೆಮೋರಿಯಲ್ ಟ್ರಸ್ಟ್‍ನ ವತಿಯಿಂದ ರಂಜನಿ ಸಂಸ್ಮರಣ ಸಂಗೀತ ಕಾರ್ಯಕ್ರಮಗಳು ಏರ್ಪಟ್ಟವು. ಸೆಪ್ಟೆಂಬರ 6 ರಂದು ನಾಲ್ಕು ಕಛೇರಿಗಳು ಮಣಿಪಾಲದ ಕೌನ್ಸಲಿಂಗ್ ಹಾಲ್‍ನಲ್ಲಿ ನಡೆದವು. ಬೆಳಗಿನ ಕಛೇರಿ – ಕು. ಅರ್ಚನಾ – ಸಮನ್ವಿ ದ್ವಂದ್ವ ಹಾಡುಗಾರಿಕೆ ಮತ್ತು ಶ್ರೀಮತಿ ಲತಾ ತಂತ್ರ್ರಿಯವರ ಹಾಡುಗಾರಿಕೆ. ಮಧ್ಯಾಹ್ನದ ನಂತರ – ಕು. ಗಾರ್ಗಿ ಶಬರಾಯ ಅವರ ಹಾಡುಗಾರಿಕೆ ಮತ್ತು ಶ್ರೀ ಅಶ್ವಿನ್ ಆನಂದ್ ಅವರ ವೀಣಾ ವಾದನ. ಕು. ಅರ್ಚನಾ – ಸಮನ್ವಿ Read More

ರಂಜನಿ ಸಂಸ್ಮರಣಾ ಸಂಗೀತ ಕಛೇರಿಗಳು – 2014 ರಂಜನಿ ಸ್ಮಾರಕ ಟ್ರಸ್ಟ್

ಸೆಪ್ಟೆಂಬರ್ 7, 2014 ಭಾನುವಾರ – ಇಡೀ ದಿನದ ಕಾರ್ಯಕ್ರಮಗಳು : ಸ್ಥಳ: ಮಣಿಪಾಲದ ಕೌನ್ಸೆಲಿಂಗ್ ಹಾಲ್, ಮಣಿಪಾಲ್ ಎಡ್ಯೂ ಬಿಲ್ಡಿಂಗ್, ಮಣಿಪಾಲ್ ಯೂನಿವರ್ಸಿಟಿ, ಮಣಿಪಾಲ. ಬೆಳಗ್ಗೆ 9.30 ಕ್ಕೆ ಸರಿಯಾಗಿ ಕಡೈನಲ್ಲೂರ್ ನ ಶ್ರೀಮತಿ ಸುಬ್ಬುಲಕ್ಷ್ಮಿ ರಘುನಾಥ್ ಅವರಿಂದ ಸುಶ್ರಾವ್ಯವಾದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ಹೆಚ್ಚು ಜನ ಬಂದಿರಲಿಲ್ಲ. ಸಮಯಕ್ಕೆ ಸರಿಯಾಗಿ ಕಚೇರಿ ಆರಂಭವಾಗಿತ್ತು. ಅತ್ಯಂತ ಸುಮಧುರ ಶಾರೀರ. ಸೂಕ್ಷ್ಮಾತಿಸೂಕ್ಷ್ಮ ಪಲುಕುಗಳು ಮತ್ತು ತುಸು ನೆಗಡಿ ಯಾದವರ ಧ್ವನಿ ಪರಿಣಾಮ ಈಕೆಯದು. ಕೆಳ ಸ್ಥಾಯಿಯಲ್ಲಿ Read More